ನಮಸ್ತೇಸ್ತು ಮಹಾಮಾಯೆ ಶ್ರೀಪೀಠೇ ಸುರಪೂಜಿತೇ ।
ಶಂಖ ಚಕ್ರಗಧಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ।।
ಲಕ್ಷ್ಮೀ ಕ್ಷೀರಸಮುದ್ರ ರಾಜತನಾಯಾಂ ಶ್ರೀ ರಂಗಧಾಮೇಶ್ವರೀಮ್
ದಾಸಿಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾನ್ಕುರಾಂ ।
ಶ್ರೀ ಮನ್ಮಂದ ಕಟಾಕ್ಷ ಲಬ್ಧವಿಭವತ್ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂತ್ರೈಲೋಕ್ಯಕುಟುಂಬಿನೀಂ ಸರಸಿಜಾಂವಂದೇಮುಕುಂದ ಪ್ರಿಯಾಂ ।।
ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಎರಡನೆಯ ಶುಕ್ರವಾರದಂದು ಆಚರಿಸುವರು. ಈ ಹಬ್ಬವನ್ನು ಹಿಂದೂಗಳು ಜಾತಿ ಭೇದವಿಲ್ಲದೆ ಅವರವರ ಸಂಪ್ರದಾಯದ ಪ್ರಕಾರ ಆಚರಿಸುವರು.
ಈ ವ್ರತವನ್ನು ಮದುವೆಯಾದ ಎಲ್ಲಾ ದಂಪತಿಗಳು ಆಚರಣೆ ಮಾಡುವ ವಾಡಿಕೆ ಉಂಟು . ಈ ವ್ರತದ ಹಿನ್ನಲೆಯಲ್ಲಿ ಒಂದು ಕಥೆ ಈ ರೀತಿ ಇದೆ. ಒಮ್ಮೆ ಶಿವ ಪಾರ್ವತಿ ಇಬ್ಬರು ಪಗಡೆ ಆಟವನ್ನು ಆಡುತ್ತಿದ್ದರು . ಪಾರ್ವತಿದೇವಿಯು ಆಡಿದ ಆಟವನೆಲ್ಲಾ ಗೆಲ್ಲುತ್ತಿದ್ದಳು ಆದರೆ ಪರಮಶಿವ ಎಲ್ಲ ಆಟದ ಗೆಲುವನ್ನು ತನ್ನದು ಎಂದು ಘೋಷಿಸಿಕೊಳ್ಳುತಿದ್ದ ಪಾರ್ವತಿ ದೇವಿಯನ್ನು ಛೇಡಿಸಲು . ಹೀಗಾಗಿ ಪಾರ್ವತಿ ದೇವಿಯು ಆಟದಲ್ಲಿ ಮೋಸ ಆಗಬಾರದು ಎಂದು ತೀರ್ಪುಗಾರರು ಇರಲಿ ಎಂದು ಶಿವನಿಂದ ಸೃಷ್ಟಿಸಲ್ಪಟ್ಟ ಚಿತ್ರನೇಮಿಯನ್ನು ನೇಮಿಸಿದಳು ಆದರೆ ಚಿತ್ರನೇಮಿಯೋ ಶಿವನ ಭಂಟ ಶಿವನದೆ ಎಲ್ಲವು ಗೆಲುವು ಎಂದು ತೀರ್ಪು ನೀಡಿದ್ದರಿಂದ ಕುಪಿತಗೊಂಡ ಪಾರ್ವತಿಯು ಆತನನ್ನು ಭೂಲೋಕದಲ್ಲಿ ಜನಿಸಿ ಕುಷ್ಟರೋಗಿಯಾಗೆಂದು ಶಾಪವನಿತ್ತಳು . ಆಗ ಪರಮಶಿವನು ಪಾರ್ವತಿ ದೇವಿಗೆ ತಾನು ಮಾಡಿದ್ದ ವೃತ್ತಾಂತವನ್ನು ವಿವರಿಸಿದನು ; ಪಾರ್ವತಿ ದೇವಿಗೆ ಅನ್ಯಾಯವಾಗಿ ಶಾಪವಿತ್ತನಲ್ಲ ಎಂದು ಭಾವಿಸಿದಳು.ಚಿತ್ರನೇಮಿಯು ತನ್ನ ಶಾಪದ ವಿಮೋಚನೆ ಹೇಗೆ ತಾಯಿ ಎಂದು ಕೇಳಿಕೊಂಡನು ಆಗ ತಾಯಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರೆ ನಿನ್ನ ಕುಷ್ಟ ರೋಗವು ಪರಿಹಾರವಾಗಿ ಮಂಗಳವಾಗುವುದು .
ಹೀಗೆ ಈ ವ್ರತದ ಆಚರಣೆಯನ್ನು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯಿಂದ ಭೂಲೋಕದಲ್ಲಿ ಎಲ್ಲರೂ ಆಚರಿಸುವ ಪರಿ ಶುರುವಾಯಿತು . ಈ ವ್ರತವನ್ನು ಯಾರು ಆಚರಿಸುವರೋ ಅವರಿಗೆ ಸಕಲ ಸೌಭಾಗ್ಯ ಮತ್ತು ಸಂಪತ್ತುಗಳಿಂದ ತಾಯಿ ವರಮಹಾಲಕ್ಷ್ಮೀ ದೇವಿಯು ಕರುಣಿಸುವಳು .
ಮೊದಲು ವಿನಾಯಕನ ಪೂಜೆ , ಯಮುನಾ ದೇವಿ ಕಲಶಕ್ಕೆ ಪೂಜೆ ಸಲ್ಲಿಸಿ ತದನಂತರ ತುಲಸಿ ಪೂಜೆ ಮಾಡಿ , ನಂತರ ವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸಬೇಕು . ಯಮುನಾ ಕಲಶದ ಆಚರಣೆ ಸಂಪ್ರದಾಯವಿದ್ದರೆ ಆಚರಿಸಬೇಕು .ಅವರವರ ಗುರು -ಹಿರಿಯರಲ್ಲಿ ವಿಚಾರಣೆ ಮಾಡಿ ಆಚರಣೆ ಮಾಡಬಹುದು .
ಯಮುನಾ ಕಲಶ ಪೂಜೆ
ಧ್ಯಾನ :
ಲೋಕಪಾಲಸ್ತುತಾಂ ದೇವೀಂ ಇಂದ್ರನೀಲ ಸಮಪ್ರಭಾಮ್ ।
ಯಮುನೇ ತ್ವಾಮಹಂ ಧ್ಯಾಯೇತ್ಸರ್ವಕಾಮ್ಯಾರ್ಥಸಿದ್ಧಯೇ ।।
ಶ್ರೀ ಯಮುನಾಯೈ ನಮಃ । ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ ।।
ಹೂವಿನಿಂದ ಪೂಜೆ ಮಾಡುವುದು .
ಆವಾಹನೆ :
ಕ್ಷೀರೋದಾರ್ಣವಸಂಭೂತೇ ಕ್ಷೀರವರ್ಣೋದಶೋಭಿತೇ ।
ಪ್ರಸನ್ನಾ ಭಾವ ಮೇ ದೇವಿ ಯಮುನೇ ತೇ ನಮೋ ನಮಃ ।।
ಶ್ರೀ ಯಮುನಾಯೈ ನಮಃ ।ಆವಾಹಯಾಮಿ ।ಆವಾಹನಂ ಸಮರ್ಪಯಾಮಿ ।।
ಹೂವಿನಿಂದ ಪೂಜೆ ಮಾಡುವುದು.
ಸಿಂಹಾಸನ :
ಸಿಂಹಾಸನ ಸಮಾರೂಢೇ ದೇವಶಕ್ತಿ ಸಮನ್ವಿತೇ ।
ಸರ್ವಲಕ್ಷಣ ಸಂಪೂರ್ಣೇ ಯಮುನಾಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ । ಸಿಂಹಾಸನಂ ಸಮರ್ಪಯಾಮಿ ।।
ಹೂವಿನಿಂದ ಪೂಜೆ ಮಾಡುವುದು.
ಪಾದ್ಯ :
ಗರುಡಾಗ್ರಜಸಂಭೂತೇ ಶಂಕರಪ್ರಿಯಭಾಮಿನಿ ।
ಸರ್ವಕಾಮಪ್ರದೇ ದೇವಿ ಯಮುನೇ ತೇ ನಮೋ ನಮಃ ।।
ಶ್ರೀ ಯಮುನಾಯೈ ನಮಃ । ಪಾದಯೋಃ ಪಾದ್ಯಂ ಪಾದ್ಯಂ ಸಮರ್ಪಯಾಮಿ ।।
ಒಂದು ಉದ್ದರಣೆ ನೀರನ್ನು ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಗೆ ಬಿಡುವುದು .