Pages

Saturday, May 2, 2015

Narasimha Nembo Devanu






ಸತ್ಯ ಜ್ಞಾನ  ಸುಖ ಸ್ವರೂಪ ಮಮಲಂ ಕ್ಷೀರಾಬ್ಧಿ ಮಧ್ಯಸ್ಥಲಮ್ ।
ಯೋಗಾರೂಢಾ  ಮತಿ ಪ್ರಸನ್ನ ವದನಂ ಭೂಷ ಸಹಸ್ರೋಜ್ವಲಮ್ ।।
ತ್ರಕ್ಷ್ಯಂ ಚಕ್ರ ಪಿನಾಕ ಸಾ ಅಭಯ ವರಾನ್ ಭಿಬ್ರಾಣ ಮರ್ಕಚ್ಛವೀಮ್ ।
ಚತ್ರೀ ಭೂತ ಫಣೀಂದ್ರ ಮಿಂದುಧವಲಂ  ಲಕ್ಷ್ಮೀ  ನೃಸಿಂಹಂ ಭಜೇ ।।

ನಾರಸಿಂಹ ನೆಂಬೋ  ದೇವನು ನಂಬಿದಂತ  ನರರಿಗೆಲ್ಲ ವರವ ಕೊಡುವನು ।।


ಆದಿಯಲ್ಲಿ  ಲಕ್ಷ್ಮಿ ಸಹಿತದಿ  ಮಲಗಿರಲು  ಬಂದರಾಗ ಸನತ್ ಕುಮಾರರು
ಆಗ ದ್ವಾರಪಾಲಕರು  ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು  ಅಸುರರಾಗಿ ಪುಟ್ಟಿರೆಂದು ।

ನಾರಸಿಂಹ  ಲಕ್ಷ್ಮೀ  ನಾರಸಿಂಹ ಕರಿಗಿರಿ  ನಾರಸಿಂಹ  ನೆಂಬೋ  ದೇವನು  ನಂಬಿದಂತ ನರರಿಗೆಲ್ಲ                                        ವರವ ಕೊಡುವನು ।।೧।।


ದಿತಿಯ ಗರ್ಭದಲ್ಲಿ  ಜನಿಸಿದ  ಹಿರಣ್ಯಾಕ್ಷ  ಹಿರಣ್ಯಕಶಿಪುರೆಂಬ  ಭ್ರಾತೃರು
ಪೃಥ್ವಿಯನ್ನು  ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ  ಖಳನ  ಕೊಂದು ಧರೆಯನುಳುಹಿದೆನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ನೀರಾ  ನಾರಸಿಂಹ  ನೆಂಬೋ ದೇವನು ನಂಬಿದಂತ ನರರಿಗೆಲ್ಲ

                                     ವರವ ಕೊಡುವನು ।।೨।।



ಅನುಜನಾದ ಹಿರಣ್ಯಾಕ್ಷನ  ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।।


ನಾರಸಿಂಹ ಲಕ್ಷ್ಮೀ  ನಾರಸಿಂಹ ಝರಣಿ  ನಾರಸಿಂಹ ನೆಂಬೋ   ದೇವನು  ನಂಬಿದಂತ ನರರಿಗೆಲ್ಲ

                                    ವರವ ಕೊಡುವನು ।।೩।।



ಇಂದ್ರ ಲೋಕ  ಸೂರೆ ಮಾಡಿದ  ಮೂರು ಲೋಕಕೆ ಅಸುರ  ತನ್ನ ಭಯವ ತೋರಿದ
ಗರ್ಭಿಣಿ ಕಯಾಧುವನ್ನು  ಬ್ರಹ್ಮಪುತ್ರ  ಬಂದು ಆಗ
ದೈತ್ಯರಾಜ ಹಿರಣ್ಯಕಶಿಪುವಿಗೆ  ಒಪ್ಪಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಮುಳಬಾಗಿಲು ನಾರಸಿಂಹ ನೆಂಬೋ  ದೇವನು  ನಂಬಿದಂತ                                        ನರರಿಗೆಲ್ಲ ವರವ ಕೊಡುವನು ।।೪।।


ನವಮಾಸಗಳು ತುಂಬಲು  ಕಯಾಧು ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು  ಕರೆಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಚಿಂತಲವಾಡಿ  ನಾರಸಿಂಹ ನೆಂಬೋ  ದೇವನು  ನಂಬಿದಂತ                                         ನರರಿಗೆಲ್ಲ ವರವ ಕೊಡುವನು।।೫।।



ಬಾಲಚಂದ್ರನಂತೆ ಬೆಳೆಯುತಾ  ಇರುತಿರಲು ಐದು ವರ್ಷ ತುಂಬಿತಾಗಲೇ
ಗುರುಗಳನ್ನು ಕರೆಸಿ ಬೇಗ  ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ  ಮಗನನ್ನು ಒಪ್ಪಿಸಿದ   ದೈತ್ಯ ತಾನು ।।


ನಾರಸಿಂಹ ಲಕ್ಷ್ಮೀ  ನಾರಸಿಂಹ ಸೀಬಿ  ನಾರಸಿಂಹ ನೆಂಬೋ  ದೇವನು  ನಂಬಿದಂತ ನರರಿಗೆಲ್ಲ                                            ವರವ ಕೊಡುವನು।।೬।।


ಓಂ ನಮಃ ಶಿವಾಯ ಎನುತಲಿ  ಅಸುರ ತನ್ನ  ಸುತನ ಬರೆದು ತೋರು ಎನ್ನಲು
ನರಹರಿಯ ನಾಮವನ್ನು  ನಗುನಗುತಲಿ ಬರೆಯುತಿರಲು
ಶ್ರವಣಂ  ಕೀರ್ತನಂ  ವಿಷ್ಣೋಃ  ಸ್ಮರಣಂ ಪಾದ ಸೇವನಂ
ಅರ್ಚನಂ ವಂದನಂ ದಾಸ್ಯಂ ಸತ್ಯಂ ಆತ್ಮ ನಿವೇದನಂ
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।।


ನಾರಸಿಂಹ ಲಕ್ಷ್ಮೀ  ನಾರಸಿಂಹ  ನಾಮಕಲ್ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೭।।



ಸುತ್ತ ಜನರ ಕರೆಸಿ ಬೇಗದಿ ಅಸುರ ತನ್ನ ಸುತನ ಕೊಲಿಸಬೇಕು  ಎಂದಾಗ
ಅಟ್ಟ  ಅಡವಿಯೊಳು  ವಿಷವಹಿಟ್ಟು   ಭೋಜನಂಗಳ  ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।।


ನಾರಸಿಂಹ ಲಕ್ಷ್ಮೀ  ನಾರಸಿಂಹ ಪಾನಕ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೮।।


ಅಂಬುಧಿಯೋಳು ಮಗನ ಮಲಗಿಸಿ  ಮೇಲೆ ದೊಡ್ಡ ಬೆಟ್ಟವನ್ನು  ಇಟ್ಟು  ಬನ್ನಿರೋ
ಹರಿಯ ಕೃಪೆಗೆ ವಶನಾದ  ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ  ಮಾಡಿ ಮನೆಗೆ  ಕೊಟ್ಟು ಕಳುಹಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಜ್ವಾಲ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೯।।


ಬೆಟ್ಟದಿಂದ ಕಟ್ಟಿ ಉರುಳಿಸಿ  ಅಸುರ ತನ್ನ ಪಟ್ಟದಾನೆ  ಕಾಲಲಿ ಮೆಟ್ಟಿಸಿ
ಹರಿವ  ಒಲೆಯ ಮಾಡಿ ಹುಲಿಯ ಬೋನಿನಲ್ಲಿ ನಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು  ಶಕ್ತನಲ್ಲದೆ ಪೋದನಂತೆ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಕಾರ್ಪರ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೧೦।।


ನಿನ್ನ ದೇವ ಇದ್ದ ಎಡೆಯನು  ತೋರು ಎನುತ ಪಿತನು  ತನ್ನ ಸುತನ ಕೋರಲು
ವಾಸವ್ಯದಿ  ಸರ್ವತ್ರ ತಸ್ಮಾಸ್ತಮ್  ದೇನ  ದೃಷ್ಯತೇ ಹಾ ಹರಿ ಸರ್ವತ್ರ ಸಾ ಸರ್ವತ್ರ
ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ ।
ಎನ್ನ ದೇವ ಇಲ್ಲದಂತ ಎಡೆಗಳುಂಟೆ  ಲೋಕದಲ್ಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ  ನರಹರಿ ।
ನರಹರಿ । ನರಹರಿ  ಬಾ ಬಾ ಬಾ ಬಾ ಬಾ ಬಾ .........

ವರಕಂಭವನ್ನು  ಒದೆಯಲು ನರಹರಿಯು ಉಗ್ರಕೋಪವನ್ನು  ತಾಳಿದ
ಸತ್ಯಂ ವಿಧಾತಂ ನಿಜ ಭೃತ್ಯ ವಾಸಿತಮ್  ವ್ಯಾಪ್ತಿಂಚ  ಭೂತೇ
ಸ್ವಖಿಲೇಶು  ತಾತ್ಮನಃ ಅದೃಷ್ಯತಾ ಅತ್ಯಧ್ಬುತರೂಪಮುತ್ತಃ
ಸ್ತಂಭೇ ಸಭಾಯ ನ ಮೃದಂ  ನ ಮಾನುಷಂ  ನ ಮೃಡಂ ನ ಮಾನುಷಂ
ಕಟಕಟೆಂಬ  ಧ್ವನಿಯ ಮಾಡಿ  ನಖಗಳಿಂದ  ಪಿಡಿದು ಒತ್ತಿ
ಕರುಳ ಬಗೆದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಭದ್ರ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೧೧।।


ಅಂತರಿಕ್ಷದಲ್ಲಿ ಅಮರರು  ನೋಡಿ ಆಗ ಪುಷ್ಪವೃಷ್ಟಿಯನ್ನೇ  ಕರೆದರು
ಅಜನ ಪಡೆದ ದೇವಿ ಬಂದು  ತೊಡೆಯ ಮೇಲೆ ಕುಳುತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡಂದಭಯವಿತ್ತ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ    ತೊರೆವೆಯ ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೧೨।।


ಲಕ್ಷ್ಮೀ  ನಾರಸಿಂಹ ಚರಿತೆಯೇ ಉದಯ ಕಾಲದಲ್ಲಿ  ಪಠಿಸುವಂತ ನರರಿಗೆಲ್ಲ
ಪುತ್ರಸಂತಾನಂಗಳಿತ್ತು  ಮತ್ತೆ ಬೇಡಿದಹಾಂಗೆ  ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ  ಪುರಂದರ ವಿಠ್ಠಲರಾಯ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಅಹೋಬಿಲ  ನಾರಸಿಂಹ ನೆಂಬೋ  ದೇವನು  ನಂಬಿದಂತ                                          ನರರಿಗೆಲ್ಲ  ವರವ ಕೊಡುವನು ।।೧೩।।


ನಾರಸಿಂಹ ಲಕ್ಷ್ಮೀ  ನಾರಸಿಂಹ ನೆಂಬೋ  ದೇವನು  ನಂಬಿದಂತ  ನರರಿಗೆಲ್ಲ                                                                         ವರವ ಕೊಡುವನು........ ।।


ನಾರಸಿಂಹ ಲಕ್ಷ್ಮೀ  ನಾರಸಿಂಹ  ಕರಿಗಿರಿ ನಾರಸಿಂಹ,ನೀರಾ  ನಾರಸಿಂಹ, ಕಾರ್ಪರ ನಾರಸಿಂಹ ,
ತೊರವೆಯ ನಾರಸಿಂಹ , ಅಹೋಬಿಲ  ನಾರಸಿಂಹ .........

Audio Link :

/Narasimha-Nembo-Devanu/Narasimha-Nembo/Song
























No comments :

Post a Comment