Pages

Friday, October 31, 2014

Kannada Rajyotsava (2014)



ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೇ
ಜಯ ಸುಂದರ ನದಿ ವನಗಳ ನಾಡೇ
ಜಯ ಹೇ ರಸ ಋಷಿಗಳ ಬೀಡೇ


ಭೂದೇವಿಯ ಮುಕುಟದ ನವ ಮಣಿಯೇ
ಗಂಧದ ಚಂದದ ಹೊನ್ನಿನ  ಗಣಿಯೇ
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೇ
ಜಯ ಹೇ ಕರ್ನಾಟಕ ಮಾತೇ ।।


ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನ ವೇಷ
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ  ಜಿನನುತ
ಭಾರತ ಜನನಿಯ ತನುಜಾತೇ
ಜಯ ಹೇ ಕರ್ನಾಟಕ  ಮಾತೇ ।।

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಾಕ್ಷರ  ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸ ಮಂಗಳ ಧಾಮ
ಕವಿ ಕೋಗಿಲೆಗಳ ಪುಣ್ಯರಾಮ
ನಾನಕ್ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೇ
ಜಯ ಹೇ ಕರ್ನಾಟಕ  ಮಾತೇ ।।


ತೈಲಪ ಹೊಯ್ಸಳಾರಾಡಿದ  ನಾಡೇ
ಡಂಕಣ ಜಕಣರ ನೆಚ್ಚಿನ ಬೀಡೇ
ಕೃಷ್ಣ ಶರಾವತಿ ತುಂಗಾ
ಕಾವೇರಿ-ಯ ವರ ರಂಗ
ಚೈತನ್ಯ ವರಹಂಸ ವಿವೇಕರ
ಭಾರತ ಜನನಿಯ ತನುಜಾತೇ
ಜಯ ಹೇ ಕರ್ನಾಟಕ  ಮಾತೇ ।।

ಶಂಕರ ಜ್ಞಾನದ  ಶಾಂತಿಯ ತೋಟ
ರಸಿಕರ  ಕಂಗಳ  ಸೆಳೆಯುವ ನೋಟ
ಹಿಂದು  ಕ್ರೈಸ್ತರ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ  ದೊರೆಗಳ ಧಾಮ
ಗಾಯಕ ವೈಣಿಕರಾಮ
ಕನ್ನಡ ನುಡಿ ಕುಣಿದಾಡುವ  ಗೇಹ
ಕನ್ನಡ ತಾಯಿಯ ದೇಹ ।।


ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೇ
ಜಯ ಸುಂದರ ನದಿ ವನಗಳ ನಾಡೇ
ಜಯ ಹೇ ರಸ ಋಷಿಗಳ ಬೀಡೇ




No comments :

Post a Comment