Pages

Thursday, December 13, 2012

ElliruvanO Ranga

ಎಲ್ಲಿರುವನೋ  ರಂಗ


ಎಲ್ಲಿರುವನೋ  ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರ ಕರೆಯೋ  ಅಲ್ಲಿ  ಬಂದೊದಗುವನೋ ।।


ತರಳ  ಪ್ರಹ್ಲಾದ  ಶ್ರೀ  ಹರಿ ವಿಶ್ವಮಯನೆಂದು
ಭಾರದೊದೆಯಳವನಪಿತ  ಕೋಪದಿಂದ
ಸ್ತಿರವಾಧೂಳಿ  ಕಂಭದಲಿ  ತೋರು ತೋರೆನೆಲು
ಭರದಿಂದ ಬರಲದಕೆ  ವೈಕುಂಠ ನೆರೆಮನೆಯೇ   ।।೧।।

ಕುರುಪತಿಯು  ದ್ರೌಪದಿಯ  ಸೀರೆಯನು ಸೆಳೆದಾಗ
ತರುಣಿ  ಹಾ  ಕೃಷ್ಣ........ ಕೋಪದಿಂದ
ಭರದಿಂದ ಅಕ್ಷಯಾಮ್ಬರವಿತ್ತ 
ಹಸ್ತಿನಾವತಿಗೂ  ದ್ವಾರಾವತಿಗೂ   ಕೂಗಳತೆಯೇ  ?  ।।೨।।

ಅಣುಹೊತ್ತಿನೊಳೆಲ್ಲಾ  ಪರಿಪೂರ್ಣ  ವಿಶ್ವಮಯ
ಗಣನೆಯಿಲ್ಲದೆ  ಮಹಾಮಹಿಮನೆನಿಪ
ಘನ  ಕೃಪಾನಿಧಿ  ನಮ್ಮ ಕಾಗಿನೆಲೆಯಾದಿ  ಕೇಶವನು
ನೆನೆವರ ಮನದೊಳಿಹನೆಂಬ  ಬಿರುದುಂಟಾಗಿ  ।।೩।।     ।।ಎಲ್ಲಿರುವನೋ।।
                                  

No comments :

Post a Comment