Pages

Wednesday, October 8, 2014

BhayavunTE Hariya





ಭಯವುಂಟೇ  ಹರಿಯ ಭಕ್ತರಿಗೆ ...... (೨) ।।ಪ।।
ತತ್ವಗಳಿರಿಯುತ  ಕೃತ್ಯವ  ಮಾಡುವ
ಸಾತ್ವಿಕರಾಗಿಹ ಸುಜನರಿಗೆ ।
                                       (ಭಯವುಂಟೇ)


ಕಾಮಕ್ರೋಧಗಳ  ಬಿಟ್ಟ ಮನದಿ ಶ್ರೀ
ರಾಮನ ಚರಣವ ಭಜಿಪರಿಗೆ ।।ಪ।।

ಸ್ವಾರ್ಥತೆಯಲಿ ಕಾಲ ವ್ಯರ್ಥ ಮಾಡದೆ
ಪುರುಷಾರ್ಥರ  ಪ್ರಧಾನ ಪಾದ ಭಜಿಪರಿಗೆ ।।ಪ।।

ಸಾಧು ಸಂಗದಲಿ ಮೋದವ  ಕೊಳ್ಳುತ
ಮಾಧವನನು  ಸತತ ನೆನೆವರಿಗೆ ।।ಪ।।

ಚಿನ್ಮಯ ಮೂರುತಿ ಪ್ರಸನ್ನ ಶ್ರೀ ಕೃಷ್ಣನ
ಉನ್ನತ ಮಹಿಮೆಯ ಸನ್ನುತಿಸಿದಕೆ ।।ಪ।।

No comments :

Post a Comment