Pages

Monday, July 28, 2014

Ellellu shivanE

ಎಲ್ಲೆಲ್ಲೂ  ಶಿವನೇ  ಎಲ್ಲೆಲ್ಲೂ  ಹರನೇ ಎಲ್ಲಾ  ಶಿವಮಯವೇ
ಶಿವಕ್ಷೇತ್ರ ದರ್ಶನ ಜೀವನ ಪಾವನ ಪೂರ್ವಜನ್ಮ ಸೌಭಾಗ್ಯವೇ ಇದು ಪೂರ್ವಜನ್ಮ ಸೌಭಾಗ್ಯವೇ ।।
                               ।।ಎಲ್ಲೆಲ್ಲೂ ।।



ಮಂಜಿನಿಂದ ತುಂಬಿದ ಹಿಮಗಿರಿ ನೀನೇ
ಮುದದಿಂದ ನಿಂತ ಕೇದಾರೇಶ್ವರ ।
ನಾಡಿನ ಅಂಚಲಿ ಕಡಲಿನ ಅಲೆಯಲಿ
ನರ್ತನ ಮಾಡುವ ರಾಮೇಶ್ವರ।।
                                      ।।ಎಲ್ಲೆಲ್ಲೂ ।।


ಹಂಪೆಯ ಕ್ಷೇತ್ರದಿ ಪಂಪಾಪತಿಯಾಗಿ
ಸೊಂಪಾಗಿ ನಿಂತ ವಿರೂಪಾಕ್ಷೇಶ್ವರ ।
ಉಡುಪಿಯ ಕ್ಷೇತ್ರದಿ ಕೃಷ್ಣಗೆ ಜೊತೆಯಾಗಿ
ಚಂದದಿ ನಿಂತ ಚಂದ್ರಮೌಳೇಶ್ವರ।।
                                          ।।ಎಲ್ಲೆಲ್ಲೂ।।



No comments :

Post a Comment