Pages

Wednesday, November 21, 2012

Satyavamtara Sangaviralu

 ಸತ್ಯವಂತರ  ಸಂಗವಿರಲು

ರಚನೆ : ಕನಕದಾಸರು


ಸತ್ಯವಂತರ  ಸಂಗವಿರಲು  ತೀರ್ಥವೇತಕೆ
ನಿತ್ಯಜ್ಞಾನಿಯಾದ  ಮೇಲೆ  ಚಿಂತೆಯಾತಕೆ  ||ಪ ||


ತಾನು  ಉಣ್ಣದ  ಪರರಿಗಿಕ್ಕಿದ  ಧನವಿದ್ದೇತಕೆ
ಮಾನ  ಹೀನನಾಗಿ  ಬಾಳ್ವ  ಮನುಜನೇತಕೆ ....... |2|
ಜ್ಞಾನವಿಲ್ಲದೇ  ನೂರು  ಕಾಲ ಬದುಕಲೇತಕೆ ........|2|
ಮಾನಿನಿಯ  ತೊರೆದವಗೆ  ಭೋಗವೇತಕೆ    ((1))

ಮಾತು  ಕೇಳದೆ  ಮಲತು ನಡೆವ  ಮಕ್ಕಳೇತಕೆ
ಪ್ರೀತಿಯಿಲ್ಲದೆ  ಎಡೆಯನಿಕ್ಕಿದ  ಅನ್ನವೇತಕೆ
ನೀತಿಯರಿತು  ನಡೆಯದಿರುವ  ಬಂಟನೇತಕೆ.......|2|
ಸೋತು  ಹೆಣ್ಣಿಗೇ  ಹೆದರಿ  ನಡೆವ  ಪುರುಷನೇತಕೆ   ((2))

ಸಂಜ್ಞೆಯರಿತು  ನಡೆಯದಿರುವ  ಸತಿಯಿದ್ದೇತಕೆ
ಮುನ್ನ  ಕೊಟ್ಟು  ಪದೆಯದನ್ನು  ಬಯಸಲೇತಕೆ
ಮನ್ನಣೆಯ  ನಡೆಸದಿರುವ  ದೊರೆಯುಯೇತಕೆ
ಚೆನ್ನ ಆದಿಕೇಶವನಲ್ಲದ ದೈವವೇತಕೆ    ((3))

No comments :

Post a Comment