Pages

Thursday, October 23, 2014

KEdarEshwara Aarati Haadu



( ಅಮ್ಮ  ಮನೆಯಲ್ಲಿ  ವ್ರತ ಮಾಡಿರುವ ಫೋಟೋ )(೨೦೧೪)



ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ
ಆರತಿಯ ಬೆಳಗಿರೆ  ದೇವಗೆ ।।

ಪಾರ್ವತಿಯ ಅರ್ಧ ದೇಹ ಪಡೆದಂತ  ದೇವಗೆ
ಪ್ರಥಮಗೈಯೇ  ಸಕಲ ಭಾಗ್ಯ ಕೊಡುವಂತ ಈಶಗೆ ।
ನಂದಿ - ಸ್ಕಂದ - ಗಣಪರೊಡನೆ  ಕೈಲಾಸದಿ  ಇರುವಗೆ
ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।।

ನಂಜನುಂಡು ಲೋಕ ಹಿತವ ಬಯಸಿದಂತ ಹರನಿಗೆ
ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ ।
ಭಕ್ತಿಯಿಂದ ಬೇಡೇ  ಒಡನೆ ಓಡಿಬರುವ ಈಶಗೆ
ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।।

ವ್ರತವಗೈಯೇ  ಮಾಂಗಲ್ಯದ ಭಾಗ್ಯ ಕೊಡುವ ಸ್ವಾಮಿಗೆ
ಭಜಿಸಿ ಬೇಡೇ  ಸಂತಾನವ   ಕೊಡುವ ಅಮಿತಗೆ ।
ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ
ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।।

ಕೋಟಿ ಕೋಟಿ  ಜೀವಗಳಿಗೆ  ಅನ್ನ  ನೀಡೋ ದಾತಗೆ
ಉಪವಾಸದ ವ್ರತವಗೈಯೇ  ಒಲಿದು ಬರುವ  ಈಶಗೆ ।
"ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ
ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।।


ನಾದಲೋಲ ನಾಟ್ಯರಾಜ" ಓಂ"ಕಾರದ  ರೂಪಗೆ
 ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ ।
ನಂದಿ  ಅರ್ಧ  ರೂಪದಲ್ಲಿ ಕೇದಾರದಿ ಇರುವಗೆ
ಪಾಂಡವರ   ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।।

"ಓಂ ನಮಃ ಶಿವಾಯ" ಓಂ ಕೇದಾರದ ಲಿಂಗಗೆ
ಮಂಗಳದ ದೀಪ ಬೆಳಗಿ ಶ್ರೀ ಗೌರಿರಮಣಗೆ ।
"ಓಂ ನಮಃ ಶಿವಾಯ" ಓಂ ಗಣಪನ ಪ್ರಿಯ ಪಿತನಿಗೆ
ಶುಭಮಂಗಳವೆನ್ನಿರೇ  ಶ್ರೀ ಸ್ಕಂದನ ಜನಕಗೆ ।।ಮಂಗಳವ।।

No comments :

Post a Comment