Pages

Friday, November 8, 2013

Kalyanam tulasi

ಯಾ ದೃಷ್ಟಾ  ನಿಖಿಲಾಘಸಂಗಶಮನೀ  ಸ್ಪೃಷ್ಟಾ ವಪುಪಾವನೀ ।
ರೋಗಾಣಾಮಭಿವಂದಿತಾ  ನಿರಸನಿ  ಸಿಕ್ತಾಂತಕತ್ರಾಸಿನಿ ।
ಪ್ರತ್ಯಾಸತ್ತಿವಿಧಾಯಿನೀ  ಭಗವತಃ  ಕೃಷ್ಣಸ್ಯ  ಸಂರೋಪಿತಾ ।
ನ್ಯಸ್ತಾ  ತಚ್ಚರಣೇ  ವಿಮುಕ್ತಿಫಲದಾ  ತಸ್ಯೈ  ತುಲಸ್ಯೈ  ನಮಃ ।।

ಕಲ್ಯಾಣಂ ತುಳಸಿ ಕಲ್ಯಾಣಂ ।।          ।।ಪ।।
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ।
ಬಲ್ಲಿದ ಶ್ರೀ ವಾಸುದೇವನಿಗೆ ।।         ।।ಅ ಪ।।


ಅಂಗಳದೊಳಗೆಲ್ಲ  ತುಳಸಿಯ  ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ ।।
ಕಂಗಳ ಪಾಪವ ಪರಿಹರಿಸುವ ।
ಮುದ್ದುರಂಗ ಬಂದಲ್ಲಿ ನೆಲೆಸಿಹನು ।।  


ಮಿಂದು ಮಡಿಯನುಟ್ಟು  ಸಂದೇಹವ ಬಿಟ್ಟು ।
ತಂದ ಶ್ರೀ ಗಂಧಾಕ್ಷತೆ  ಪುಷ್ಪದಿಂದ ।।
ಸಿಂಧುಶಯನನ  ವೃಂದಾವನದಿ ಪೂಜಿಸೆ ।
ಕುಂದದ  ಭಾಗ್ಯವ ಕೊಡುತಿಹಳು ।।


ಉತ್ಥಾನ ದ್ವಾದಶಿ ದಿವಸದಿ ಕೃಷ್ಣಗೆ ।
ಉತ್ತಮ ತುಳಸಿಗೆ ವಿವಾಹವ ।।
ಚಿತ್ತನಿರ್ಮಲರಾಗಿ  ಮಾಡಿದವರಿಗೆ ।
ಉತ್ತಮ ಗತಿ ಈವ ಪುರಂದರ ವಿಠಲ ।।


ಆಡಿಯೋ ಲಿಂಕ್ -
kalyanam-tulasi-kalyanam_song





No comments :

Post a Comment